Music Video

Featured In

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
Gurukiran
Gurukiran
Composer
K. Kalyan
K. Kalyan
Songwriter

Lyrics

ಗೀತಾಂಜಲಿ... ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ... ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು ಮಂಜಾಗಲೇನೆ ನಾ? ನಿನ್ನ ಕೋಪ ತಂಪು ಮಾಡಲು ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು| ಕೇಳದೆ ದೇವಿ ವರವ ಕೊಡಳು ಹೊಗಳದೆ ನಾರಿ ಮನಸು ಕೊಡಳು ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ| ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ|
Writer(s): Kalyan K, Gurukiran Gurukiran Lyrics powered by www.musixmatch.com
instagramSharePathic_arrow_out